ಕೋಣ ಮತ್ತು ನಾವು

ಏಕೆ ಜನುವ ಕೊಟ್ಟೆಯಮ್ಮಾ !
ಗಂಡಾಗಿ
ಜನರ ದೇವರಿಗೆ ತಲೆ ಕೆಡಿಸಿಕೊಳ್ಳಲಿಕೆ.

ನಾನು ಹುಟ್ಟಿದ ಕೂಡಲೆ
ಮಾರಿದೇವಿಯ ಒಳಿತು ಕೋರಿ
ಹರಕೆ ಕಟ್ಟಿ, ಕಾಲು ತೊಳೆದು ಬಿಟ್ಟರು
ಸಾಕಿದ್ದಕ್ಕೆ ಸುಂಕವಾಗಿ ಪ್ರಾಣ ಕೇಳುವ ಜನರು.

ನಾನು ಕೋಣ! ಉಬ್ಬಿ ಹೋದೆ
ದುಡಿಸಿ ದಣಿಸದೆ
ತಿಂದು ತಿರುಗಾಡಿಕೊಂಡು ಬೆಳೆಯಲು ಬಿಟ್ಟಿದ್ದಕ್ಕೆ;
ಗೊತ್ತಾಗಲಿಲ್ಲ ಆಗ ಇದರ ಹಿಂದಿನ ಹಿಕ್ಮತ್ತು.

ಮತ್ತನಾದೆ
ಸಿಕ್ಕ ಸಿಕ್ಕ ಕಡೆಗೆ ನುಗ್ಗಿ
ಸಿಕ್ಕ ಸಿಕ್ಕದ್ದು ಮೇದು
ಸಿಕ್ಕ ಸಿಕ್ಕಂಗೆ ಅಡ್ಡಾಡುತ್ತ
ಸಿಕ್ಕ ಸಿಕ್ಕಲ್ಲಿ ಮಲಗಿ ಎದ್ದು
ಸಿಕ್ಕ ಸಿಕ್ಕಂಗೆ ಕೊಬ್ಬಿ ಬೆಳೆದೆ.

ಕಂಬದಂತ ಕಾಲು
ಹಳೇ ರುಬ್ಬು ಗುಂಡಿನಂತ ತಲೆ
ಉಕ್ಕಿನಂತ ಕೋಡು
ಬೆಂಕಿ ಉಂಡೆಯಂತ ಕಣ್ಣು

ಹೊಗೆ ಕಾರುವ ಹೊಳ್ಳೆ
ಕರ್ರಗೆ ಮಿರ ಮಿರ ಮಿಂಚುವ
ಸಣ್ಣ ಗುಡ್ಡದಂತ ದೇಹ
ನಡೆದಾಡುತಿದ್ದ ನೆಲ ನಡುಗುತಿತ್ತು
ಅಂತಕನ ಕೋಣದಂತೆ.

ಊರೊಳಗೆ ನುಗ್ಗಿದರೆ
ಸಾವನ್ನು ಕಂಡಂತೆ
ಓಡಿ ಹೋಗಿ
ಮಕ್ಕಳು ಮರಿ ಬಾಚಿಕೊಂಡು
ಬಯಲಲ್ಲಿ ಕಟ್ಟಿದ್ದ ದನ ಕರು ಕಣ್ಣಿ ಹರಿದು
ಬಾಗಿಲು ಹಾಕಿ ಕೊಳ್ಳುವರು;
ಕನಸಲ್ಲಿ ಕಂಡರೂ ಬೆಚ್ಚಿ ಬೀಳುವರು.

ನನ್ನ ದೇಹ, ಭಾವದಿ
ಮಾರಿದೇವಿ ಪರಿಭಾವಿಸಿ
ಕೇಡಿನ ಭೀತಿಯಲ್ಲಿ
ತಿರುಗಿ ಬೀಳರು
ಸಹಿಸಿ ನಡೆವರು.

ಅಂತ್ಯವಿಲ್ಲದದು ಯಾವುದಿದೆ ಈ ಲೋಕದಲಿ
ನನಗೂ ಬಂತು;
ಜಾತ್ರೆಯು ಗೊತ್ತಾಯಿತು
ಹುಡುಕಿಸಿ ತಂದರು ನನ್ನನ್ನು ಬಿಡದೆ
ಸುತ್ತಿಸಿದರು ಏಳೂರ ಮನೆ, ಮನೆಯನ್ನು.

ಪೂಜೆಯ ಮಾಡಿಸಿ
ಸುಲಭದಿ ಕಡಿಯಲು
ಪಟ್ಟೆ ಶಿರಕೆ ಎಣ್ಣೆ ಹೊಯ್ಯಿಸಿ
ಕೊಡತಿಯಲಿ ಗುದ್ದುತ್ತಿದ್ದರೆ
ಗುದ್ದು ಗುದ್ದಿಗೂ ಎದ್ದದ್ದು ಬೀಳುತಿತ್ತು ಜೀವ.

ಪಾಷಂಡಿಗಳು
ಕತ್ತರಿಸಿ ಎಸೆಯಲೊಲ್ಲರು!
ತೀರಿ ಹೋಗುತ್ತಿತ್ತಲ್ಲ! ಎಲ್ಲಾ!
ಎಚಿದೊರಲುತಿತ್ತು; ತರಹರಿಸುತಿತ್ತು ಜೀವ.

ಇವರವರೇ ಕೆಲವರು ಮಹಾನುಭಾವರು
ಹಿಂಸೆ ಬೇಡವೆಂದು ಸಾರಿ ಸಾರಿ ಹೇಳಿದರು
ಎಂದಿಗೂ ಕೇಳಿಲ್ಲ; ಕೇಳುವುದಿಲ್ಲ!
ಒಳ್ಳೆಯದನ್ನು ಹೇಳಿದ ಯಾರನ್ನೂ
ಸುಖವಾಗಿ ಸಾಯಲು ಬಿಟ್ಟಿಲ್ಲ
ನ್ಯಾಯವು ಇವರಿಗೆ ಒಂದಲ್ಲ; ಹೊಂದುವುದಿಲ್ಲ
ಜೀವ ಚಕ್ರದ ದುರ್ಬಳಕೆ ನಿಂತಿಲ್ಲ.

ಮೂಢ ನಂಬಿಕೆಯ
ಹೊಸ, ಹೊಸ ಬಟ್ಟೆಯುಟ್ಟುಕೊಂಡು
ಬಂಧು, ಬಳಗ ಕೂಡಿಕೊಂಡು
ಅಸಹಜ ಮಿಂಚನು ತುಂಬಿಕೊಂಡು
ವಿಧ, ವಿಧ ವಾದ್ಯಗಳ ಮೇಳದಲಿ
ಹಾಡುತ್ತ, ಕೂಗುತ್ತ, ಕುಣಿಯುತ್ತ,
ಉನ್ಮಾದ ಸೂಸುತ್ತ,
ಮೌರೆವಣಿಗೆಯಲಿ ಸಾಗಿದರು.

ಉತ್ತೇಜಿತ ಉತ್ಸವ ಗುಡಿಯನು ಸಾರಿತ್ತು
ಪೂಜೆಯು ಮೊದಲಾಯಿತು
ಸ್ಮಶಾನ ಮೌನವು ಕವಿಯಿತು
ಆರತಿಯಾಗಿ ಅಪ್ಪಣೆ ಹೊರಬಿತ್ತು
ಬಿದ್ದವು ತಲೆಗಳು ಸಾಲು, ಸಾಲಾಗಿ
ನನ್ನಿಂದ ಶುರುವಾಗಿ
ಕುರಿ, ಕೋಳಿ ತರುವಾಯ.

ನೋಡಿದರೆ…!
ಒಬ್ಬರ ತಲೆಯೂ ತಗ್ಗಿರಲಿಲ್ಲ
ಪಶ್ಚಾತ್ತಾಪದ ಒಂದು ಕ್ಷೀಣ ಶಬ್ಧವೂ ಕೇಳಿ ಬರಲಿಲ್ಲ.

ಸೃಷ್ಟಿಯಲಿ ಶ್ರೇಷ್ಠರೆನ್ನುವರು
ವಿಚಾರಿಸರು
ನಂಬಿಕಯಲಿ ಯಾವುದನ್ನೂ!!
ಸ್ವಹಿತವಾದಿಗಳು ಏನು ಮಾಡಲು ಹೇಸರು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡು ಪರಿವಾರಗಳು
Next post ಪ್ರಕೃತಿ ಎನ್ನನ್ಯಾಕೆ ಬರೆಸಿಹುದು ?

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys